Thursday, April 23, 2009

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ..

ಮೊನ್ನೆ ನನ್ನ ಗೆಳೆಯ ಗಣೇಶ್, ನನಗೊಂದು ಲಿಂಕ್ ಕಳಿಸಿ, ಆ ಹಾಡು ಕೇಳು ಅಂದ..
ನಾನು ಸರಿ ಅಂತ ಕೇಳಿದೆ..
ನೀವು ಆ ಹಾಡನ್ನು ಕೇಳಿರಬಹುದು,
ಆದರೆ ನಾನು ಕೇಳಿದ್ದು ಇದೆ ಮೊದಲ ಸಾರಿ... ನನಗಂತೂ ತುಂಬ ಇಷ್ಟ ಆಯ್ತು.. ಕೇಳಿರದವರು ಕೇಳಿ ಆನಂದಿಸಿ...

Get this widget | Track details | eSnips Social DNA

ಗಾಯನ: ಬಿ.ಆರ್.ಛಾಯ
ಸಂಗೀತ: ಸಿ. ಅಶ್ವಥ್
ರಚನೆ: ಚನ್ನವೀರ ಕಣವಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ||
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಪ||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು ||೨||
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು ||೨||
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ ||೨||
ಶುಭಮಸ್ತು ಶುಭಮಸ್ತು ಎನ್ನುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು ||೨||
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು ||೨||
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಆ.. ಆ….. ಆ… ಆ…..ಆ.. ಆ….. ಆ….

ಇದರ ವೀಡಿಯೊ ನೋಡಲು ಇಲ್ಲಿ ಕ್ಲಿಕ್ಕ್ಕಿಸಿ

ಕೃಪೆ :
http://www.kannadalyrics.com
http://www.esnips.com
http://www.videogirmit.com
Share/Save/Bookmark

Saturday, April 18, 2009

ಮಳೇಲಿ ನೆನದದ್ದು ನೆನಪಿಡುವೆ...................


ಟೈಟಲ್ ನೋಡಿ ಒಳ್ಳೆ ಲವ್ ಸ್ಟೋರಿ ಇರಬೇಕು ಅನ್ಕೊಂಡ್ರಾ ?...
ಇದು ಲವ್ ಸ್ಟೋರಿನೆ ಆದ್ರೆ ಇಲ್ಲಿ ಹುಡುಗಿ ಇಲ್ಲ, ಇರೋದು ಮಳೆ......

ಮಳೆಗೂ ನನಗೂ ಎಲ್ಲಿಲ್ಲದ ಸಂಬಂಧ ಅನ್ಸುತ್ತೆ. ಮಳೇಲಿ ನೆನೆಯೋದು ಅಂದ್ರೆ ನನಗೆ ತುಂಬಾ ಇಷ್ಟ. ಆದ್ರೆ ಏನ್ ಮಾಡೋದು ಕೆಲವೊಂದು ಸಾರಿ ಇದೇ ಮಳೆಯಿಂದ ತೊಂದರೆ ಅನುಭವಿಸಿದ್ದು ಉಂಟು.

ಮೈಸೂರಿನಲ್ಲಿ ಓದ್ತಾ ಇದ್ದಾಗ...........
ನಾನು ರಾತ್ರಿಯ ಊಟಕ್ಕೆ ಸುಮಾರು ಕಿಲೋಮೀಟರು ದೂರದಲ್ಲಿದ್ದ ಒಂದು ಮೆಸ್ (mess) ಗೆ ಹೋಗ್ತಾ ಇದ್ದೆ. ಅದೇನೋ ಬೇರೆ ಕಡೆ ಊಟ ನನಗೆ ಅಸ್ಟು ಇಷ್ಟ ಆಗ್ತಾ ಇರ್ಲಿಲ್ಲ, ಹಾಗಾಗಿ ಅಲ್ಲೇ ಹೋಗಿ ಊಟ ಮಾಡಿ ಬರ್ತಿದ್ದೆ.
ಹೋಗಿ ಬರಲು ಸೇರಿ ಕಿಲೋಮೀಟರು ದೂರ. ಅಸ್ಟು ದೂರ ನಡಿದು ಹೋಗ್ತಾ ಇರ್ಲಿಲ್ಲ, ಹಾಗೇನಾದ್ರೂ ನಡೆದು ಹೋಗಿ ತಿಂದು ಬರೋದ್ರಲ್ಲಿ ಮತ್ತೆ ಹೊಟ್ಟೆ ಹಸಿಯೋದು ಗ್ಯಾರಂಟೀ. ಹಾಗಾಗಿ ಬೈಕನಲ್ಲೇ ಹೋಗ್ತಾ ಇದ್ದೆ.
ಮೈಸೂರಿನಲ್ಲಿ ಮಳೆಗಾಲ ಬಂದ್ರೆ ಸಾಕು ಮಳೆರಾಯನದೇ ದರ್ಬಾರು. ರಾತ್ರಿ ಊಟದ ಸಮಯಕ್ಕೆ ಸರಿಯಾಗಿ ಮಳೆ ಬರ್ತಿತ್ತು. ಏನ್ ಮಾಡೋದು ?... ಹೊಟ್ಟೆ ಹಸಿವು, ಮೆಸ್ ಬಿಟ್ರೆ ಬೇರೆ ಹೋಟೆಲ್ ಇಷ್ಟ ಇಲ್ಲ.
ಅದೇ ಮಳೆಯಲ್ಲೇ ಸ್ನಾನ ಮಾಡ್ತಾ ಹೋಗ್ತಾ ಇದ್ದೆ. ನೆನೆದ ಬಟ್ಟೆಯಲ್ಲಿ ಕೂತು ಊಟ ಮಾಡಿ, ಅದೇ ಮಳೆಯಲ್ಲಿ ಮರಳಿ ಸ್ನಾನ ಮಾಡುತ್ತ ಮರುಳುತ್ತಿದ್ದೆ. ಹೀಗೆ ಕಡಿಮೆ ಅಂದ್ರು ದಿನಕ್ಕೆ ಮೂರು ಸಾರಿ ಸ್ನಾನ. ಒಮ್ಮೊಮ್ಮೆ ಬೈಕ್ ಓಡಿಸುವಾಗ ದಾರಿನೇ ಕಾಣಿಸ್ತಾ ಇರ್ಲಿಲ್ಲ, ಕಣ್ಣು ತರೆಯೋದು ಕಷ್ಟ, ಅಸ್ಟು ಮಳೆ. ಆಗ ಹೆಲ್ಮೆಟ್ ಕಡ್ಡಾಯ ಇರ್ಲಿಲ್ಲ ಹಾಗಾಗಿ ತಲೆ ಮೇಲೆ ಬೇಳುವ ಒಂದೊಂದು ಹನಿ, ಸಣ್ಣ ಕಲ್ಲು ಬಿದ್ದ ಹಾಗೆ ಬಿಳ್ತಾ ಇತ್ತು. ಕೆಲೋವೊಂದು ಸಾರಿ ಮರದ ಸಣ್ಣ ಪುಟ್ಟ ವಯಸ್ಸಾದ ಕೊಂಬೆಗಳು ಸಹ ಬಿಳ್ತಾ ಇದ್ವು. ಪುಣ್ಯ ಚಿಕ್ಕ ಕೊಂಬೆಗಳು ಬಿಳ್ತಾ ಇದ್ವು, ದೊಡ್ದದೆನದ್ರು ಬಿದ್ದಿದ್ರೆ.... ?.........
ನೆನದ ಬಟ್ಟೆಗಳು ಎರೆಡೆರೆಡು ದಿನಗಳು ಕಳೆದರು ಒದ್ದೆಯಾಗಿಯೇ ಇರ್ತಾ ಇದ್ವು, ಹಿಡಿದ ಮಳೆ ಬಿಡ್ತಾನೆ ಇರ್ಲಿಲ್ಲ ಅಲ್ವಾ.....
ರೇನ್ ಕೊಟ್ ಹಾಕಬೇಕಿತ್ತು ಅಂತಿರಾ ?.. ಹಾಕಬಹುದಿತ್ತು, ಆದ್ರೆ ನನಗೆ ಹಾಕೋಕೆ ಇಷ್ಟ ಇಲ್ಲ, ಅದು ಅಲ್ದೆ ಮಳೇಲಿ ನೆನೆಯೋದು ಅಂದ್ರೆ ನನಗೆ ಇಷ್ಟ ಅಲ್ವಾ...
ಮಳೇಲಿ ನೆನದ ದಿನಗಳು ಸೂಪರ್ ರೀ ....

ಇನ್ನು, ಬೆಂಗಳೂರಿನಲ್ಲಿ,..........
ಒಂದು ದಿನ ಬೆಳಿಗ್ಗೆ ಲೇಟ್ ಆಗಿ ಎದ್ದಿದ್ದೆ. ಹಾಗಾಗಿ, ಆಫೀಸಿಗೆ ತುರಾತುರಿಯಲ್ಲಿ ರೆಡಿ ಆಗಿ, ರೇನ್ ಕೊಟ್ ಮರೆತು ಬೈಕ್ ಹತ್ತಿ ಹೊರಟೆ. ಮನೆ ಬಿಡುವಾಗ ಮಳೆ ಬರ್ತಾ ಇರ್ಲಿಲ್ಲ, ಬಿಸಿಲು ಕೂಡ ಇತ್ತು. ಹಾಗಾಗಿ ರೇನ್ ಕೊಟ್ ನೆನಪು ಕೂಡ ಆಗ್ಲಿಲ್ಲ.
ಸರಿ, ಒಂದೆರೆಡು ಕಿಲೋಮೀಟರು ಚಲಿಸಿದ ಬಳಿಕ, ಇದ್ದಕ್ಕಿದ್ದ ಹಾಗೆ ಬಿಸಿಲು ಮರೆಯಾಗಿ ಮೋಡ ಮುಚ್ಚಿತು, ಹಾಗೆ ಮಳೆ ಕೂಡ ಜೋರಾಗಿ ಬೀಳ ಹತ್ತಿತು. ಬೈಕ್ ನಿಲ್ಲಿಸಲು ರಸ್ತೆ ಪಕ್ಕದಲ್ಲಿ ಒಂದು ಸೂರನ್ನು ಹುಡುಕಿದೆ, ಆದರೆ ಎಲ್ಲೆಲ್ಲು ರಸ್ತೆಯ ಪಕ್ಕದಲ್ಲಿ ಒಂದು ಸೂರು ಕಾಣಲಿಲ್ಲ. ವಿಧಿಯಿಲ್ಲದೆ ಮಳೆಯಲ್ಲೇ ನೆನೆದು ಆಫೀಸ್ ತಲುಪಿದೆ. ಆಫೀಸ್ ತಲುಪಿದಾಗ ನನ್ನ ಬಟ್ಟೆಯಲ್ಲಾ ಸಂಪೂರ್ಣವಾಗಿ ತೋಯ್ದು ಹೋಗಿತ್ತು.
ಆಫೀಸ್ ಹೊರಗಡೆ ನಿಂತು, ನೆನದ ಬಟ್ಟೆಯಲ್ಲಿ ಒಳಗಡೆ ಹೇಗೆ ಹೋಗಲಿ ?
ಅದಕ್ಕಿಂತ ಆಫೀಸಿಗೆ ರಜೆ ಹಾಕಿ ಅದೇ ಮಳೆಯಲ್ಲಿ ವಾಪಸ್ಸು ಮನೆಗೆ ಮರುಳಲಾ? ವಾಪಾಸ್ ಹೋದರೆ ಇಲ್ಲಿಯವರಗೆ ಬಂದಿದ್ದು ವ್ಯರ್ಥ ಆಗಿ ಬಿಡತ್ತೆ...
ಎಂತಾ ಮಾಡುವುದು ? ಆಫೀಸ್ ಹೊರಗಡೆ ಆಲೋಚಿಸುತ್ತ ನಿಂತೆ.
ಆಫೀಸಿಗೆ ಹತ್ತಿರದಲ್ಲಿದ್ದ ಒಂದು ಬಟ್ಟೆ ಅಂಗಡಿ ಕಾಣಿಸಿತು. ಬಟ್ಟೆ ಅಂಗಡಿಗೆ ಹೋದೆ, ಅಲ್ಲಿ ಹೊಸ ಬಟ್ಟೆಗಳನ್ನು ಕೊಂಡೆ.
ಪುಣ್ಯ ತಿಂಗಳ ಕೊನೆಯಾಗಿರದುದ್ದರಿಂದ ಕೈಯಲ್ಲಿ ಹಣ ಇತ್ತು. ಹೊಸ ಬಟ್ಟೆಗಳನ್ನು ಹಾಕಿಕೊಂಡು, ಒದ್ದೆಬಟ್ಟೆಗಳನ್ನು ಪ್ಲಾಸ್ಟಿಕ್ ಚೀಲಾದಲ್ಲಿ ಇಟ್ಟುಕೊಂಡು, ಆಫೀಸಿಗೆ ಬಂದೆ.
ಅಂತು ವದ್ದೆ ಬಟ್ಟೆಗಳು, ಮನೆ ಸೇರುವವರೆಗೂ ಪ್ಲಾಸ್ಟಿಕ್ ಚೀಲಾದಲ್ಲಿ ಸಮಾಧಿಯಾಗಿದ್ದವು. ಮನೆಗೆ ಹೋದ ಮೇಲೆಯೇ ಬಟ್ಟೆಗಳ ಆತ್ಮಕ್ಕೆ ಜೀವ ಬಂದಿದ್ದು.

ಆಫೀಸಿನ ಒಳ ಹೋದಾಗ ನನ್ನ ಮನವೇಕೊ ದುನಿಯಾ ಚಿತ್ರದ " ಪಾಪಿ ದುನಿಯಾ" ಹಾಡಿನ ಸಾಲುಗಳನ್ನು ಹಾಡುತ್ತಿತ್ತು...
"ಮು೦ಜಾನೆವರೆಗೂ ಸೋನೆ ಸುರಿದ ದಿನಾ೦ಕ ಗುರುತಿಡುವೇ,
ಮಳೇಲಿ ನೆನದದ್ದು ನೆನಪಿಡುವೆ..................."

ಇನ್ನು ಬಹಳಷ್ಟು ಮಳೇಲಿ ನೆನದ ನೆನಪುಗಳು ಇದಾವೆ,
ನಿಮಗೆ ಈ ಲೇಖನ ಇಷ್ಟ ಆದರೆ, ಆ ನೆನಪುಗಳನ್ನು ಬರೀತೀನಿ.........
Share/Save/Bookmark

Monday, April 13, 2009

ದೇವರಲ್ಲಿ ಪ್ರಾರ್ಥಿಸುತ್ತೇನೆ



ನಮ್ಮ ಕಂಪನಿ ತರ ಇನ್ನೆರೆಡು ಕಂಪನಿಗಳು ಒಂದೇ ಕ್ಲಾಯೆಂಟ್ ಕಂಪೆನಿಗೆ ಕೆಲಸ ಮಾಡುತ್ತೆ. ಆ ಇನ್ನೆರೆಡು ಕಂಪನಿಗಳು ಇಟಲಿಯಲ್ಲಿವೆ. ಒಂದು ರೋಮ್, ಇನ್ನೊಂದು ಲಕುಲಾ ನಗರದಲ್ಲಿವೆ.
ನನಗೆ ಇ ಎರಡು ಕಂಪನಿಯಲ್ಲಿ ಕೆಲಸ ಮಾಡುವ ೧೫ ಜನ ಸ್ನೇಹಿತರಿದ್ದಾರೆ.
ಲಕುಲಾ ನಗರದಲ್ಲಿರುವ ಕಂಪೆನಿಯಿಂದ ೫, ರೋಮ್ ನಲ್ಲಿರುವ ಕಂಪೆನಿಯಿಂದ ೧೦ ಜನ ಸೇರಿ ಒಂದೇ ಪ್ರಾಜೆಕ್ಟನಲ್ಲಿ ಕೆಲಸ ಮಾಡುತ್ತೇವೆ. ನಾವು ಒಬ್ಬರಿಗೊಬ್ಬರು ತುಂಬಾ ಆತ್ಮಿಯರಾಗಿದ್ದೇವೆ.
ಮೊನ್ನೆ ಏಪ್ರಿಲ್ ಆರನೇ ತಾರೀಕು ಸಂಭಾವಿಸಿದ ಭೂಕಂಪದಲ್ಲಿ ಲಕುಲಾ ನಗರ ನೆಲಕಚ್ಚಿದೆ. ಅಲ್ಲಿ ಬಹಳಷ್ಟು ಮನೆಗಳು ನೆಲಕ್ಕುರುಳಿವೆ. ಸುಮಾರು ೨೦೦ಕ್ಕು ಹೆಚ್ಚು ಪ್ರಾಣಹಾನಿ ಸಂಭವಿಸಿದೆ. ನಮ್ಮ ೫ ಜನ ಹಾಗು ಅವರ ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಿನಿದ ಲಕುಲಾ ನಗರದಿಂದ ಯಾರು online ಬಂದಿರಲಿಲ್ಲ. ಇಂದು ಸಾಯಂಕಾಲ ಅವರಲ್ಲಿ ಒಬ್ಬ online ಬಂದಿದ್ದ. ನನ್ನ ಜೊತೆ ಸಂಭಾಷಣೆ ನಡೆಸಿದ. ಅವನು ನಡೆದ ಘಟನೆ ವಿವರಿಸಿದ್ದು ಹೀಗೆ :
"ಹಾಯ್ ಶಿವ,
ಇಲ್ಲಿ ಭೂಕಂಪ ಸಂಭವಿಸಿ ತುಂಬಾ ಹಾನಿಯಾಗಿದೆ. ಇದು ಸಾಮನ್ಯ ಭುಕಂಪವಲ್ಲ. ನಮ್ಮ ಎಲ್ಲರ ಮನೆಗಳು ನೆಲಕ್ಕುರುಳಿವೆ. ನಮ್ಮ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾವು ಎಲ್ಲವನ್ನು ಕೆಳೆದುಕೊಂಡಿದ್ದೇವೆ. ನಾವು ಈಗ ನಮ್ಮ ಕಾರಿನಲ್ಲಿ ಜೀವನ ನಡೆಸುತ್ತಿದ್ದೇವೆ. ನಮ್ಮ ಕಂಪನಿ ನಡೆಸುತ್ತಿದ್ದ ವ್ಯಕ್ತಿಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ವ್ಯಕ್ತಿ ಬಹಳಷ್ಟು ಕಳೆದುಕೊಂಡಿದ್ದಾನೆ. ನಮ್ಮ ಆಫೀಸ್ ಕಟ್ಟಡ ಕೂಡ ಬಿದ್ದು ಹೋಗಿದೆ. ಇನ್ನು ವ್ಯಕ್ತಿ ಕಂಪನಿ ನಡೆಸುವುದು ಸಂಶಯವಾಗಿದೆ. ಘಟನೆಯಿಂದ ನಾನು ತುಂಬಾ ನೊಂದಿದ್ದೇನೆ.
ನಾವು ಚಿಕ್ಕ ಮನೆ ಕಟ್ಟಲು ಕನಿಸ್ಟ ತಿಂಗಳಾದರೂ ಬೇಕು, ಅದು ನಮ್ಮ ಸರಕಾರ (Govt) ಸಹಾಯ ಮಾಡಿದಲ್ಲಿ.
ನಾವು ಕೆಲಸಕ್ಕೆ ಎಂದು ಮರುಳುತ್ತೆವೋ ಗೊತ್ತಿಲ್ಲ.
ಅದೇನೋ ಗೊತ್ತಿಲ್ಲ ಶಿವ, ದುಃಖದ ಸಂದರ್ಭದಲ್ಲಿ ನಿನ್ನ ಜೊತೆ ಮಾತನಾಡಿದಾಗ ನನಗೆ ವಿಶೇಷವಾದ ಆನಂದ ಆಗಿದೆ. ಧನ್ಯವಾದಗಳು ಶಿವ"

ನನಗೂ ತುಂಬಾ ದುಖವಾಯಿತು. ನಾನು ಸಾಂತ್ವನ ಹೇಳುವಸ್ಟು ದೊಡ್ಡವನಲ್ಲ. ಆದರೆ ಸಣ್ಣ ಸಮಾಧಾನದ ಮಾತುಗಳನ್ನಡಿದೆ. ಆದಸ್ಟು ಬೇಗ ಅವರು ಕೆಲಸಕ್ಕೆ ಮರುಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಆದೇಕೋ ನನಗೂ ಕೂಡ ಈ ವಿಷಯವನ್ನು ನಿಮ್ಮಲ್ಲಿ ಹೇಳಿಕೊಳ್ಳುವ ಮನಸ್ಸಾಯಿತು. ಅದಕ್ಕೆ ಹೇಳಿಕೊಂಡಿದ್ದೇನೆ.
Share/Save/Bookmark

Thursday, April 9, 2009

ನಾನೊಬ್ಬ ಸಸ್ಯಹಾರಿ...



ಈ ಚಿತ್ರದ ಹಿಂದೆ ಒಂದು ಸಣ್ಣ ಕಥೆ ಇದೆ.
ನನಗೆ ಇತರ ಒಂದು ಫೋಟೋ ತೆಗಿಸ್ಗೋಳೋ ಆಸೆಯಾಯಿತು. ಆದರೆ ನಾನು ಇಂದಿನವರೆಗೂ ಮೀನನ್ನು ಕೈಯಿಂದ ಮುಟ್ಟಿಲ್ಲ.
ಮತ್ತೆ?, ಈ ಚಿತ್ರದಲ್ಲಿ ಹಿಡಿದಿದ್ದಿಯಲ್ಲ ಅನ್ನುತ್ತೀರಾ ?
ಇಲ್ಲ ರೀ, ನಾನು ಹಿಡಿದಿಲ್ಲ.
ಅದನ್ನು ಹಿಡಿದಿದ್ದು ನನ್ನ ಗೆಳೆಯ ನಟ.
ಫೋಟೋ ಕ್ಲಿಕ್ಕ್ಕಿಸಿದ್ದು, ನನ್ನ ಇನ್ನೊಬ್ಬ ಗೆಳೆಯ ಪವನ್.
ನಾನು ಕೊಟ್ಟಿದ್ದು ಬರಿ ಫೋಸ್ ಅಸ್ಟೆ...
ಮೀನು ನನ್ನ ಬಾಯಿಗೆ ನೇರವಾಗಿ ಇಲ್ಲ , ಅದು ನನ್ನ ಬಾಯಿಯ ಬಲಗಡೆಗೆ ಇದೆ..
ಚನ್ನಾಗಿದೆ ಅಲ್ವಾ ?
Share/Save/Bookmark

Tuesday, April 7, 2009

ಮೊದಲಸಲ....



ಎರಡು ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಹೊಸ ಪ್ರಾಜೆಕ್ಟಿನ ವಿಷಯವಾಗಿ ಇಟಲಿ ದೇಶದ ಗ್ರಾಹಕನ ಜೊತೆ ಟೆಕ್ಸ್ಟ್ ಚಾಟ್ (text chat) ಮಾಡಬೇಕಾಯಿತು. ಆ ವ್ಯಕ್ತಿಯ ಹೆಸರು "ಲೂಕಾ" ಅಂತ. ಸರಿ, ಟೆಕ್ಸ್ಟ್ ಚಾಟ್ ಮಾಡಲು ಶುರು ಮಾಡಿದೆ.
ನನ್ನ ಕಡೆಯಿಂದ "ಹಲೋ ಸರ್" ಅಂತ ಕಳಿಸಿದೆ.
ಅ ಕಡೆಯಿಂದ "ನಾನು ಸರ್ ಅಲ್ಲ" ಎನ್ನುವ ಉತ್ತರ ಬಂತು.
(ಒಹ್!!! ಅವರು ಹೆಂಗಸೋ, ಗಂಡಸೋ ತಿಳಿಯದೆ ಸರ್ ಅಂದುಬಿಟ್ಟೆ. ಅವರು ಹೆಂಗಸು ಇರಬೇಕು ಎಂದುಕೊಳ್ಳುತ್ತ, ಕ್ಷಮೆ ಯಾಚಿಸಲು ಮತ್ತೊಂದು ಸಂದೇಶ ಕಳಿಸಿದೆ.)
ನಾನು ಆಗ "ಸಾರೀ ಮೇಡಂ" ಅಂದೇ..
ಆಗ ಆ ಕಡೆಯಿಂದ "ನಾನು ಮೇಡಂ ಅಲ್ಲ"
(ನನಗ್ಯಾಕೋ ಕಸಿವಿಸಿಯಾಯಿತು, ಇದೇನಪ್ಪ, ಅತ್ತ ಸರ್ ಅಲ್ಲ, ಇತ್ತ ಮೇಡಂ ಅಲ್ಲ... ತೆಲೆಕೆಡಿಸಿಕೊಳ್ಳುತ್ತ ಕೂತೆ..,
ಸ್ವಲ್ಪ ಸಮಯದ ಬಳಿಕ, ಆ ಕಡೆಯಿಂದ ಇನ್ನೊದು ಸಂದೇಶ ಬಂತು..)
ಆ ಕಡೆಯಿಂದ: "ನಾನು ಸಾರ್ ಅಲ್ಲ, ಮೇಡಂ ಅಲ್ಲ, ನನ್ನ ಹೆಸರು ಲೂಕಾ ಅಂತ (ನಾನು ಗಂಡಸೇ), ನನ್ನ ಹೆಸರಿಡಿದೆ ಕರಿ. ನಾನು ನಿನ್ನ ಸ್ನೇಹಿತನಿದ್ದಂತೆ.."
ನನಗೆ ಆ ಮಾತನ್ನು ಕೇಳಿ ಸ್ವಲ್ಪ ನಗು ಬಂತು ಹಾಗೆ, ಆವರ ಅತ್ಮಿಯತೆಗೆ ತುಂಬಾ ಸಂತೋಷವು ಆಯ್ತು.
ಎರಡು ವರ್ಷಗಳಿಂದ ಅದೇ ಗ್ರಾಹಕನ ಜೊತೆ ಕೆಲಸ ಮಾಡ್ತಾ ಇದೀನಿ. ತುಂಬಾ ಒಳ್ಳೆ ಮನುಷ್ಯ. ಎಂದಿಗೂ ಆ ವ್ಯಕ್ತಿ ನನ್ನನ್ನು ಚಿಕ್ಕವನಂತೆ ಕಂಡಿಲ್ಲ,
ನನ್ನನ್ನು ಸ್ನೇಹಿತನಿಗಿಂತ ಹೆಚ್ಚಾಗಿ ಆತ್ಮಿಯತೆಯಿಂದ ಕಾಣುತ್ತಾನೆ.
ಇಂತ ಒಳ್ಳೆ ಗ್ರಾಹಕ,
ಕ್ಷಮಿಸಿ,
ಸ್ನೇಹಿತನನ್ನು ಪಡೆದ ನಾನು ಧನ್ಯ....
ಚಿರಕಾಲ ಇರಲಿ ಈ ಬಂಧ...

Share/Save/Bookmark

Monday, April 6, 2009

ಬಯಲಾಟವೋ ಹುಡುಗಾಟವೋ...!!!

ನಮ್ಮ ಚಿಕ್ಕಮ್ಮನ ಬಲವಂತಕ್ಕಾಗಿ ಮೊನ್ನೆ ಅವರ ಊರ ಜಾತ್ರೆಗೆ ಹೋಗಿದ್ದೆ. ಜಾತ್ರೆ ಅಂದ್ರೆ ಎಲ್ಲೆಲ್ಲು ಸಡಗರ ಸಂಭ್ರಮ. ನನ್ನ ಹಾಗೆಯೇ ನನ್ನ ಅಜ್ಜಿಯ ಮನೆಯವರು ಜಾತ್ರೆಗೆ ಬಂದಿದ್ದರು. ಜಾತ್ರೆ ತುಂಬಾ ಚನ್ನಾಗಿ ನಡಿತು. ಜಾತ್ರೆ ನಡೆದ ದಿನದ ರಾತ್ರಿ, ಬಯಲಾಟ (ರಾತ್ರಿ ಆಡುವ ನಾಟಕ) ಇತ್ತು. ನನಗೆ ಬಯಲಾಟ ನೋಡೋದು ಇಷ್ಟ, ಆದ್ರೆ ಏನ್ ಮಾಡೋದು ರಾತ್ರಿಯೆಲ್ಲಾ ಅದನ್ನು ನೋಡ್ತಾ ಕೂತರೆ ಮುರಿದಿನ ಏನು ಕೆಲಸ ಮಾಡೋಕೆ ಆಗೋಲ್ಲ. ಹಾಗಾಗಿ ನೋಡೋ ಧೈರ್ಯ ಮಾಡಲಿಲ್ಲ.

ಬೇಸಿಗೆಗಾಲ ಆದುದರಿಂದ, ಮನೆಯಲ್ಲಿ ಮಲಗೋಕೆ ಬಹಳ ಕಷ್ಟ.
ಹಾಗಾಗಿ ಮನೆಯ ಮೇಲೆ ಮಲಗೋದು ರೂಡಿ. ಬಯಲಾಟ ಅಂದ್ರೆ ಕೇಳಬೇಕೆ, ಜೋರಾಗಿ ಕೇಳಿಸುವ ಶಬ್ದ. ಅದು ಅಲ್ಲದೆ ಆ ಬಯಲಾಟ ನಡೀತಾ ಇದ್ದುದು ನನ್ನ ಚಿಕ್ಕಮ್ಮನ ಮನೆಯ ತುಂಬಾ ಹತ್ತಿರದಲ್ಲಿ. ಹಾಗಾಗಿ ಆ ಶಬ್ದಕ್ಕೆ ನಿದ್ದೆ ಬರುವುದು ದೊಡ್ಡ ವಿಷಯವೇ.

ನಮ್ಮ ಅಜ್ಜಿಯ ಮನೆಯ ಚಾಲಕ ಶಿವು ಕಾರಿನಲ್ಲಿ ಮಲುಗುತ್ತಿದ್ದುದನ್ನು ಕಂಡು, ಕಾರಿನಲ್ಲಿ ಏಕೆ ಮಲುಗುತಿ, ಮನೆಯ ಮೇಲೆ ಗಾಳಿ ಚನ್ನಾಗಿ ಬರುತ್ತೆ. ಅಲ್ಲೇ ಮಲಗು ಬಾ ಅಂದೇ. ಅವನು ಸರಿ ಅಂತ ನನ್ನ ಜೊತೆ ಬಂದು, ಮಹಡಿಯ ಮೇಲೆ ಮಲಗಿದ. ನಾನು ಸ್ವಲ್ಪ ಪ್ರಯಾಣ ಮಾಡಿ ದಣಿದಿದ್ದರಿಂದಲೋ ಏನೋ, ನನಗೆ ಬಯಲಾಟದ ಸ್ವಬ್ದ ಹೆಚ್ಚಾಗಿ ನಿದ್ದೆಗೆ ಅಡ್ಡಿಯಾಗಲಿಲ್ಲ. ಚನ್ನಾಗಿ ಕುಂಬಕರ್ಣ ನಿದ್ದೆ ಮಾಡಿದೆ.

ನಾನು ಬೆಳಿಗ್ಗೆ ಎದ್ದಾಗ ಸೂರ್ಯ ನನ್ನನ್ನು ಕುಕ್ಕಿ ಕುಕ್ಕಿ ನೋಡುತ್ತಿದ್ದ. ಬಹುಶ ನಾನು ಇನ್ನು ಮಲಗಿರುವುದನ್ನು ಕಂಡು ಅವನಿಗೆ ಹೊಟ್ಟೆಕಿಚ್ಚೋ ಏನೋ ?.
ಸರಿ ನಾನು ಎದ್ದಾಗ, ನನ್ನ ಕಣ್ಣ ಮುಂದೆ ಶಿವು ಬಂದು ಕೇಳಿದ, " ನಿಮಗೆ ರಾತ್ರಿ ನಿದ್ದೆ ಬಂತಾ ? "
ನಾನು ಚನ್ನಾಗಿ ಬಂತು ಕಣೋ, ಅದು ಸರಿ ಯಾಕೆ ಹಾಗೇ ಕೇಳಿದೆ ?
ಆಗ ಅವನು: " ರಾತ್ರಿ ಬಯಲಾಟದ ಶಬ್ದಕ್ಕೆ ಸರಿಯಾಗಿ ನಿದ್ದೆ ಬರಲಿಲ್ಲ, ಮದ್ಯ ಮದ್ಯ ಎಚ್ಚರವಾಗುತ್ತಿತ್ತು."
ನಾನು ಅಯ್ಯೋ ಪಾಪ ಅಂದೆ.
ಆಗ ಅವನು: ನಿಮಗೊಂದು ಮಜಾ ಗೊತ್ತೇ ?
ನಾನು: ಏನು ?
ಅವನು: "ರಾತ್ರಿ ಬಯಲಾಟ ನಡೆಯುವಾಗ, ನನಗೆ ಮದ್ಯ ಎಚ್ಚರವಾದಾಗ ಏನು ಕೂಗಿದರು ಗೊತ್ತೇ?, ದ್ರೋಪದಿಯ ಪಾತ್ರದಾರಿ ಎಲ್ಲೋ ಹೋಗಿರಬೇಕು ಅಂತ ಕಾಣಿಸುತ್ತೆ, ಅದಕ್ಕೆ ಅವಳನ್ನು ಪರದೆಯ ಹಿಂದೆ ಬರಹೇಳಲು ಮೈಕ್ ನಲ್ಲಿ ಕೊಗಿದ್ದು : ಅಮ್ಮ ದ್ರೋಪದಿ, ಯಾರ ಮನೆಯಲ್ಲಿ ಟೀ ಕುಡಿತಾ ಕೂತಿದಿಯಾ ? , ಬೇಗಾ ಬಾ, ಇಲ್ಲಿ ಕೌರವರು ವೇಟಿಂಗೂ (waiting) "

ಬಹುಶ ಕೌರವರು, ದ್ರೌಪದಿಯ ವಸ್ತ್ರಾಪಹರಣದ ದೃಶ್ಯಕ್ಕಾಗಿ ಕಾದಿದ್ದರೇನು ?....
ನಾನು ಅದನ್ನು ಕೇಳಿ ನಕ್ಕಿದ್ದೋ ನಕ್ಕಿದ್ದು...

Share/Save/Bookmark

Saturday, April 4, 2009

ಚಿತ್ರದುರ್ಗ ಪ್ರವಾಸ

ಚಿತ್ರದುರ್ಗದಲ್ಲಿರುವ ನನ್ನ ಸ್ನೇಹಿತರಾದ ಹನುಮಂತ (ಪ್ರೀತಿಯಿಂದ ಹನು) ಹಾಗು ಮಂಜು (ಕಡುವ) ಸುಜ್ಲಾನ್ (suzlon) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಬಹಳದಿನದ ಕರೆಗೆ ಓಗೊಟ್ಟು ನಾಲ್ಕು ಸ್ನೇಹಿತರು ಸೇರಿ ಪ್ರವಾಸ ಬೆಳಿಸಿದೆವು.
ನಾನು ಪ್ರವಾಸದಲ್ಲಿ ಮಾಡಿದ ಮಜಾ ಹಾಗು ಅನುಭವಿಸಿದ ಸಂತೋಷ ಮಾತಿನಲ್ಲಿ ಹೇಳುವುದು ಸ್ವಲ್ಪ ಕಷ್ಟದ ಕೆಲಸ, ಹಾಗಾಗಿ ಚಿತ್ರಗಳು ಒಳಗೂಡಿದ ಈ ಲೇಖನ.

ದೇವಸ್ತಾನಕ್ಕೆ ಮೊದಲ ಬೇಟಿ.


ವಿದ್ಯುತ್ ಉತ್ಪಾದನೆಯ ಗಾಳಿಯಂತ್ರಗಳು (ವಿಂಡ್ ಪವರ್ - wind power)


೮೩ ಮೀಟರ್ ಎತ್ತರವಿರುವ ಗಾಳಿಯಂತ್ರ.
ಗಾಳಿಯಂತ್ರವನ್ನು ಹತ್ತಿರದಿಂದ ನೋಡಿದಾಗ, ಅದನ್ನು ಏರುವ ಮನಸಾಯಿತು. ಗೆಳೆಯನನ್ನು ಕೇಳಿದೆ. ಸರಿ ಹತ್ತೋಣ ಅಂದ. ಹತ್ತಲು ತನ್ನ ಸಹೋದ್ಯೋಗಿಯ ಗ್ಲೌಸ್ (hand glouse) ಹಾಗು ಬೂಟ್ (shoes) ಕೊಟ್ಟ. ನನ್ನ ಜೊತೆಗೆ ಅವರು ಕೂಡ ಹತ್ತಿದರು.


ಗಾಳಿಯಂತ್ರದ ಒಳನೋಟ. ಹತ್ತಲು ಇರುವ ಏಣಿ. ಆ ಏಣಿ ತುಂಬ ನೇರವಾಗಿರುತ್ತದೆ (very straight)


ಗಾಳಿಯಂತ್ರದ ಒಳಗಿನ ನೋಟ. ಗಾಳಿಯ ಚಲನೆಗೆ ತಿರುಗಿಸಲು ಹಾಗು ವಿದ್ಯುತ್ ಸಂಗ್ರಹಿಸಿ ಸಾಗಿಸಲು ಬೇಕಾದ ಯಂತ್ರಗಳು.



ಗಾಳಿಯಂತ್ರದ ಮೇಲೇರಿದಾಗ ತೆಗೆದ ಚಿತ್ರಗಳು.

ಇನ್ನು ಕೋಟೆಯ ಕಡೆಗೆ......

ಕೋಟೆಯ ಹೊರಗಡೆ ಇರುವ ಕೊಳ.


ಮದ್ದು ಬೀಸುವ ಕಲ್ಲುಗಳು..


ಕೋಟೆಯ ಒಳಗೆ.


ಟಂಕಸಾಲೆ ಮತ್ತು ಪಾಳೇಗಾರರ ಕಚೇರಿ.


ಅಕ್ಕ ತಂಗಿ ಕೊಳ.


ಕಾಶಿವಿಶ್ವನಾಥ ದೇವಾಲಯ.


ನನ್ನ ಹಾಗು ನನ್ನ ಸ್ನೇಹಿತರ ಸಣ್ಣ ಪುಟ್ಟ ಸಾಹಸಗಳು... :D


ಇದು ಒನಕೆ ಓಬವ್ವನ ಮನೆಯಂತೆ, ಅದಕ್ಕೆ ಊಟ ಮಾಡೋ ಫೋಸ್ ಕೊಟ್ಟಿದ್ದು.


ಇದೆ ಕಿಂಡಿಯಲ್ಲಿ ನುಸುಳಿ ಬಂದ ಎದುರಾಳಿ ಸೈನಿಕರನ್ನು ಒನಕೆಯಿಂದ ಹೊಡೆದು ಸಾಯಿಸಿದ ಓಬವ್ವ. ಸದ್ಯಕ್ಕೆ ಆ ಸ್ಥಳದಲ್ಲಿ ಒನಕೆ ಇಲ್ಲದ ಕಾರಣ, ವಾಟರ್ ಬಾಟಲ್ನೆ ಒನಕೆ ಅಂತ ತಿಳ್ಕೊಳಿ :P



ಚಂದ್ರವಳ್ಳಿ ಕೆರೆ ಹಾಗು ಗುಹೆ.



ಪ್ರಾಣಿ ಸಂಗ್ರಹಾಲಯ..
Share/Save/Bookmark