Monday, March 30, 2009

ಫಲಿತಾಂಶ

ಇದು ಕೆಲವು ವರ್ಷಗಳ ಹಿಂದಿನ ವಿಷಯ.
ಅಂದು ನಾನು ಕೆಲವು ಕಾರಣಗಳಿಂದ ಹತ್ತಿರದ ಪಟ್ಟಣಕ್ಕೆ ಹೋಗಲು ತಯಾರಿ ನಡೆಸುತ್ತಿದ್ದೆ.
ನಾನು ಪಟ್ಟಣಕ್ಕೆ ಹೋಗುವುದು ತಿಳಿದು, ಪಕ್ಕದ ಮನೆಯ ಇಬ್ಬರು ಹುಡುಗರು ನನ್ನ ಹತ್ತಿರ ಬಂದು ಕೇಳಿದರು..
"ಅಣ್ಣ, ಪೇಟೆಗೆ ಹೋಗುತ್ತಿದ್ದಿಯಾ ? "
"ಹೌದು" ಅಂದೆ ನಾನು,
ಅವರು : "ಅಣ್ಣ ನಮ್ಮ PUC ಪರೀಕ್ಷೆಯ ಫಲಿತಾಂಶ ಬಂದಿದೆ ಅಂತೆ. ನಮ್ಮ ಪರೀಕ್ಷಾ ಫಲಿತಾಂಶವನ್ನು ಇಂಟರ್ನೆಟ್ ನಲ್ಲಿ ನೋಡ್ಕೊಂಡು ಬರ್ತಿರಾ ?."
ನಾನು: "ಆಯ್ತು. ನಿಮ್ಮ ರೆಜಿಸ್ಟರ್ ನಂಬರ್ ಕೊಡಿ.. ನೋಡ್ಕೊಂಡು ಬರ್ತೀನಿ."
ಅವರು: "ಥ್ಯಾಂಕ್ಸ್ ಅಣ್ಣ ..."
ನಾನು: " its ok."

(ನನ್ನ ಊರು ಅತ್ತ ಪಟ್ಟಣವಲ್ಲ,
ಇತ್ತ ಹಳ್ಳಿಯಲ್ಲ,
ನನ್ನುರಲ್ಲಿ ಅಂತರ್ಜಾಲ ಶೋಧಿಸಲು (internet browse), ಒಂದು ಸೈಬರ್ ಸೆಂಟರ್ ಕೂಡ ಇರಲಿಲ್ಲ. )

ನಾನು ಪೇಟೆಗೆ ಹೋಗಿ, ಅಲ್ಲಿ ನನ್ನ ಕೆಲಸ ಕಾರ್ಯಗಳನ್ನು ಮುಗಿಸಿ, ನಂತರ ಬ್ರೌಸಿಂಗ್ ಸೆಂಟರ್ ಗೆ ಹೋದೆ...
ಬ್ರೌಸಿಂಗ್ ಸೆಂಟರ್ ಗೆ ಹೋಗಿ ಅವರ ರೆಜಿಸ್ಟರ್ ನಂಬರ್ ಕೊಟ್ಟೆ.
(ಕೆಲವು ಬ್ರೌಸಿಂಗ್ ಸೆಂಟರ್ ನಲ್ಲಿ ಫಲಿತಾಂಶ ತೋರಿಸುವ ಸೈಟ್ ಗಳನ್ನೂ ನಿಷೇದ (ಬ್ಲಾಕ್) ಮಾಡಿರುತ್ತಾರೆ, ಆದಕಾರಣ ಅವರೇ ಪ್ರತಿ ಫಲಿತಾಂಶಕ್ಕೆ ಹತ್ತು ರುಪಾಯಿಗಳನ್ನು ಪಡೆದು ಫಲಿತಾಂಶ ಹೇಳುತ್ತಾರೆ. ನಾನು ಹೋಗಿದ್ದು ಅದೇ ತರಹದ ಬ್ರೌಸಿಂಗ್ ಸೆಂಟರ್ ಗೆ).
ಆ ಬ್ರೌಸಿಂಗ್ ಸೆಂಟರ್ ನವರು ನಾನು ಕೊಟ್ಟ ಎರಡು ನಂಬರ್ ಗಳನ್ನು ಆ ತೆಗೆದುಕೊಂಡು,
ಸೈಟ್ ನಲ್ಲಿ ಎಂಟರ್ ಮಾಡಿ.
ನನ್ನನ್ನು "ಫಲಿತಾಂಶ ಬರಿದುಕೋ, ಹೇಳುತ್ತೇನೆ" ಅಂದರು...
ಸರಿ, ನಾನು ಪೆನ್ನು ಹಾಗು ಒಂದು ಪುಟ್ಟ ಕಾಲಿ ಹಾಳೆಯನ್ನು ಹಿಡಿದು, ಅವರ ಫಲಿತಾಂಶವನ್ನು ಬರೆದುಕೊಳ್ಳ ತೊಡಗಿದೆ.
ಆ ಆಪರೇಟರ್ ಹೇಳಿದ.
"ಹೆಸರು : ಅಭ್ಯರ್ತಿ ೧
ಫಲಿತಾಂಶ: ಫೇಲ್."
ನಾನು ಮನಸಲ್ಲೇ ಅಯ್ಯೋ ಪಾಪ ಅಂದುಕೊಂಡೆ, ಸರಿ ಅಂಕಗಳನ್ನು ಹೇಳಿ ಅಂತ ಕೇಳಿದೆ..
ಸರಿ ಬರೆದುಕೊಳ್ಳಿ ಅಂದ..
"ಇಂಗ್ಲಿಷ್ : ೫" ಅಂದ
ಇಷ್ಟು ಕಮ್ಮಿ ಅಂಕವೇ ಅಂದುಕೊಳ್ಳುತ್ತ, ಬರೆದುಕೊಂಡೆ..
ಆಮೇಲೆ ಅವನು ನನ್ನ ಮುಖವನ್ನೇ ನೋಡುತ್ತಾ
"ಕನ್ನಡ : ೪ , ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ... ಏನ್ರಿ ಇಷ್ಟು ಕಮ್ಮಿ ಮಾರ್ಕ್ಸ ? ಅದು ಕನ್ನಡದಲ್ಲಿ..."
ನಾನು ಅವರಿಗೆ: "ಇದು ನನ್ನ ಫಲಿತಾಂಶವಲ್ಲ, ಇದು ನನ್ನ ಪಕ್ಕದ ಮನೆ ಹುಡುಗನದು" ಅಂದೆ...
ಅವನು ನಂಬಿದನೋ ಇಲ್ಲವೊ ಗೊತ್ತಿಲ್ಲ, ನಾನು ಮಾತ್ರ ಅವರಿಗೆ ದಡ್ದನಂತೆ ಕಾಣಿಸಿದೆ...
ಸರಿ, ಹೀಗೆ ಎಲ್ಲ ವಿಷಯಗಳ ಅಂಕಗಳನ್ನು ಬರೆದುಕೊಂಡೆ..
ಎಲ್ಲ ವಿಷೆಯಗಳ ಅಂಕಗಳು ಸೇರಿ ೫೦ ಆಗಿತ್ತು...
ನಾನು ಸುಸ್ತೋ ಸುಸ್ತು..
ಅಲ್ಲಿರುವವರಿಗೆಲ್ಲ ನನ್ನ ಮೇಲೆಯೇ ಕಣ್ಣು..

ಸರಿ ಈಗ ಅಭ್ಯರ್ತಿ ೨, ಫಲಿತಾಂಶ ಬರೆದುಕೊಳ್ಳಿ ಅಂದ..
ನಾನು ಹೇಳಿ ಅಂದೆ.
ಫಲಿತಾಂಶ : ಫೇಲ್
ನಾನು ಮನಸಲ್ಲೇ, ಇವನು ಕೂಡ ನನ್ನ ಮರ್ಯಾದೆ ಕಳಿತ ಇದಾನಲ್ಲಪ್ಪ ಅಂದುಕೊಂಡೆ, ಸರಿ ಅಂಕಗಳನ್ನು ಹೇಳಿ ಅಂದೆ.
"ಇಂಗ್ಲಿಷ್: ೬",
ಅವನು ಮತ್ತೊಮ್ಮೆ ನನ್ನ ಮುಖವನ್ನೇ ದಿಟ್ಟಿಸಿ ನೋಡುತ್ತಾ
"ಕನ್ನಡ : ೨ " ಅಂದ...
ನಾನು ಪುನಃ ಸಂಕಟದಲ್ಲಿ ಅವರಿಗೆ " ರೀ, ನಿಜವಾಗಿಯೂ ಇದು ನನ್ನ ಫಲಿತಾಂಶವಲ್ಲ "
"ಹೋಗ್ಲಿ ಬಿಡಿ, ಬೇರೆ ವಿಷೆಯಗಳ ಅಂಕಗಳನ್ನು ಬರೆದುಕೊಳ್ಳಿ" ಅಂದ..
ನಾನು ಬ್ರೌಸಿಂಗ್ ಸೆಂಟರ್ ಗೆ ಬಂದ ಕರ್ಮಕ್ಕಾಗಿ ಎಲ್ಲ ವಿಷಯಗಳ ಅಂಕಗಳನ್ನು ಬರೆದುಕೊಂಡೆ.
ಇವನ ಎಲ್ಲ ವಿಷಯಗಳ ಅಂಕಗಳು ಸೇರಿ, ೩೫ ಆಗಿತ್ತು.
ಯಾವುದೇ ವಿಷಯದಲ್ಲಿ ಒಬ್ಬರ ಅಂಕಗಳು ಹತ್ತರ ಗಡಿ ದಾಟಿರಲಿಲ್ಲ ( ಎಲ್ಲ single digit)

ಸರಿ ಅವರಿಬ್ಬರ ಫಲಿತಾಂಶ ಪಟ್ಟಿ ಹಿಡಿದು, ನನ್ನ ಊರಿಗೆ ಹೊರೆಟೆ.
ಊರ ತಲುಪಿದ ಬಳಿಕ, ನಾನು ಅವರ ಹತ್ತಿರ ಹೋಗಲಿಲ್ಲ .
ಅವರೇ, ನಾನು ಪೇಟೆಯಿಂದ ಬಂದಿರುವ ವಿಷಯ ತೆಳಿದು ಓಡೋಡಿ ಬಂದರು..
ನಾನು ಅವರನ್ನು ಯಾರು ಇಲ್ಲದ ಸ್ಥಳಕ್ಕೆ ಕರೆದುಕೊಂಡು ಹೋದೆ..
"ಅಣ್ಣ, ನಮ್ಮಿಬ್ಬರ ಫಲಿತಾಂಶ ಏನಾಯ್ತು ?"
"ಇಬ್ಬರು ಫೇಲ್ ಆಗಿದ್ದೀರಿ" ಅಂದೆ.
"ಯಾಕೋ ಹೀಗಾಯ್ತು ?.. " ಅಂದೆ
ಅವರು.. "ನಮಗೆ ಓದೋ ಇಂಟರೆಸ್ಟ್ ಇರ್ಲಿಲ್ಲ ಅಂದ್ರು."
ನಾನು: "ಫೇಲ್ ಆದ್ರಿ ಅಂತ ಬೇಜಾರ್ ಮಾಡ್ಕೋಬೇಡಿ ಅಂದೆ..."
ಅವರು: "ನೀವೇನು ಅಸ್ಟೊಂದು ಸೀರಿಯಸ್ ಆಗಿ ತೊಗೋಬೇಡಿ, ನಮಗೆ ಮುಂಚೆನೇ ಗೊತ್ತಿತ್ತು, ನಮಗೆ ಇದೆಲ್ಲ ಲೆಕ್ಕಕಿಲ್ಲ.."
ನನಗಿಂತ ಅವರೇ ತುಂಬಾ ಧೈರ್ಯದಿಂದ ಇದ್ದದ್ದು ನೋಡಿ ನನಗೆ ವಿಚಿತ್ರ ಅನಿಸಿತು..
ಸರಿ, ತೆಗೆದುಕೊಳ್ಳಿ ನಿಮ್ಮ ನಿಮ್ಮ ಅಂಕಪಟ್ಟಿ ಎಂದು ಅವರಿಗೆ ಅವರ ಅಂಕಪಟ್ಟಿಯನ್ನು ಕೊಟ್ಟೆ.
ಅವರು ಅಂಕಗಳನ್ನು ನೋಡುತ್ತಾ, ಒಬ್ಬ ಇನ್ನೊಬ್ಬನಿಗೆ
"ಲೋ, ನನಗೆ ಗಣಿತದಲ್ಲಿ ನಿನಗಿಂತ ೪ ಅಂಕ ಜಾಸ್ತಿ" ಅಂತ ಕುಶಿಯಿಂದ ಹೇಳಿದ..
ಆಗ ಇನ್ನೊಬ್ಬ ಹೇಳಿದಾ,
" ಲೋ, ಕನ್ನಡದಲ್ಲಿ ನಿನಗಿಂತ ನನಗೆ ೨ ಅಂಕ ಜಾಸ್ತಿ.." ಅಂದ.

ಅವರಿಗೆ ಫೇಲ್ ಆದ ಯಾವುದೇ ದುಃಖ ಇರಲಿಲ್ಲ. ಅದರ ಬದಲಾಗಿ ಅವರು "ನನಗೆ ಅದರಲ್ಲಿ ಹೆಚ್ಚು ಅಂಕ, ನನಗೆ ಇದರಲ್ಲೇ ಹೆಚ್ಚು ಅಂಕ" ಅಂತ ಕಚ್ಚಡುತ್ತಿದ್ದರು...

ನನಗೆ ಇದ್ದಕ್ಕಿದ್ದ ಹಾಗೆ ನಗು ಬಂದುಬಿಟ್ಟಿತ್ತು...
Share/Save/Bookmark

Wednesday, March 25, 2009

ಯುಗಾದಿ ಶುಭಾಶಯಗಳು

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...
ಹೊಸ ವರುಷ ಎಲ್ಲರಿಗೂ ಹೊಸ ಹರುಷ ತರಲಿ...

-- . ರಾ. ಬೇಂದ್ರೆ..

Share/Save/Bookmark

Tuesday, March 24, 2009

ಜಾಗಿಂಗ್



ನನ್ನ ರೂಂಮೇಟ್ ಹೆಸರು ನಟರಾಜ್.. ಪ್ರೀತಿಯಿಂದ ನಟ ಅಂತಿವಿ.
ಅವನು ಕೆಲಸಕ್ಕೆ ಸೇರಿ ೨ ವರ್ಷ ಆಗಿತ್ತು.. ಸ್ವಲ್ಪ ಹೊಟ್ಟೆನು ಬಂದಿತ್ತು. ಕೂತಲ್ಲೇ ಕುಳಿತು ಕೀ ಬೋರ್ಡ್ ಕುಟ್ಟೋ ಕೆಲಸ ಅಲ್ವಾ ನಂಬ್ದು. ಹಾಗಾಗಿ ಸ್ವಲ್ಪ ಹೊಟ್ಟೆ ಬಂದಿತ್ತು..
ಅವನಿಗೆ, ಯಾಕೋ ಹೊಟ್ಟೆ ಬಂದಿದ್ದು ಸರಿ ಕಾಣಲಿಲ್ಲ.
ಏನಾದ್ರು ಮಾಡಿ ಹೊಟ್ಟೆ ಕರಿಗಿಸಬೇಕು ಅಂದ್ಕೊಂಡ.
ಸರಿ, ಹೊಟ್ಟೆ ಕರಿಗಿಸೋಕೆ ಬೆಳಿಗ್ಗೆ ಜಾಗಿಂಗ್ ಹೋಗೋ ಪ್ಲಾನ್ ಹಾಕಿದ.
ನನ್ನ ಕರೆದೆ, ನಾನು ಇಲ್ಲ ಕಣೋ. ನಾನು ಬರೋಲ್ಲ ಅಂದೆ..
ನನ್ನ ಮೊಬೈಲ್ ನಲ್ಲಿ ೫ ಗಂಟೆಗೆ ಅಲಾರಂ ಸೆಟ್ ಮಾಡಿ ಮಲಗಿದ (ನನ್ ಮೊಬೈಲ್ ನಲ್ಲಿ ಶಬ್ದ ಜೋರಾಗಿ ಬರುತ್ತೆ ಅದಕ್ಕೆ).
ಅವನು ನನ್ ಮೊಬೈಲ್ನಲ್ಲಿ ಅಲಾರಂ ಸೆಟ್ ಮಾಡಿರೋದು ನಂಗೆ ಗೊತ್ತಿರ್ಲಿಲ್ಲ.
ಸರಿ ಬೆಳಿಗ್ಗೆ ಅಲಾರಂ ಬಡಿದಾಗ ಎದ್ದು, ಜಾಗಿಂಗ್ ಹೊರಟ.
ಬೆಂಗಳೂರಿನ ರಸ್ತೆಗಳಲ್ಲಿ ವಾಕಿಂಗ್ ಮಾಡಲು ಹೊರಟ. ಜನರೇ ಕಾಣಿಸುತ್ತಿಲ್ಲ..
ಬರಿ ಕಾಲಿ ಕಾಲಿ ರಸ್ತೆಗಳು..
ಮನಸ್ಸಲ್ಲಿ ಅವನು , " ಇದೇನು ಬೆಂಗಳೂರು ಜನಾನೋ ಏನೋ, ಎಷ್ಟು ಸೋಮಾರಿಗಳು, ಬೆಳಿಗ್ಗೆಯಾದರು ವಾಕಿಂಗ್ ಮಾಡೋರು ಕಾಣಿಸ್ತಿಲ್ಲ... ಸೋಮಾರಿಗಳು, ಸೋಮಾರಿಗಳು" ಅಂತ ಬೈಯುತ್ತ, ಸರಿಯಾಗಿ ಒಂದು ಗಂಟೆಗಳ ಕಾಲ ವಾಕಿಂಗ್ ಮಾಡಿ ಮನೆಗೆ ಹಿಂತಿರಿಗಿದ.
ಯಾವುದಾದರು ಸಂದೇಶ(message) ಬಂದಿದವಾ? ಅಂತ ಅವನ ಮೊಬೈಲ್ ಹಿಡಿದ..
ಯಾವುದು ಸಂದೇಶ ಬಂದಿರಲಿಲ್ಲ..
ಮೊಬೈಲ್ ನೋಡುತ್ತಿದ್ದಂತೆ ಅವನ ಮುಖದಲ್ಲಿ ಆಶ್ಚರ್ಯ ಭಾವ ಮೂಡಿತ್ತು.
ಅವನು ಮೊಬೈಲನ್ನು ಎರೆಡೆರಡು ಬಾರಿ ಸರಿಯಾಗಿ ನೋಡಿದ,ಹಾಗೆ ಟಿವಿ ಆನ್ ಮಾಡಿದ. ಟೈಮ್ ತೋರಿಸೋ ಚಾನೆಲ್ ಓಪನ್ ಮಾಡಿದ. (ಕೆಲವು ಚಾನಲ್ ಗಳು ಸಮಯ ತೋರ್ಸ್ತಾರೆ. ಉದಾಹರಣೆಗೆ ಕೆಲವು ನ್ಯೂಸ್ ಚಾನಲ್ ಗಳು)
ಅವನ ಮೊಬೈಲಿನಲ್ಲೂ, ಟಿವಿಯಲ್ಲೂ ಸಮಯ ಇನ್ನು ೫ ಗಂಟೆ..
ನನ್ನ ಮೊಬೈಲಿನಲ್ಲಿ ಟೈಮ್ ೬, ಆದರೆ ಅವನ ಮೊಬೈಲ್ನಲ್ಲಿ, ಟಿವಿಯಲ್ಲಿ ಇನ್ನು ೫ ಗಂಟೆ !!!!.
ಬೆಳಿಗ್ಗೆ ಎದ್ದ ನನ್ನನ್ನು ಕೇಳಿದ, "ಯಾಕೋ ನಿನ್ನ ಮೊಬೈಲಿನಲ್ಲಿ ಟೈಮ್ ರಾಂಗ್ ಇದೆಯಾ ?"
ಯಾಕೆ ?
ನಿನ್ನ ಮೊಬೈಲಿನಲ್ಲಿ ಟೈಮ್ ಒಂದು ಗಂಟೆ ಮುಂದೆ ಇದೆ.
ಆಗ ನಾನಂದೆ, "ಇಲ್ಲ, ನಾನೇ ಒಂದು ಗಂಟೆ ಯಾವಾಗಲು ಮುಂದೆ ಇಟ್ತಿರ್ತೀನಿ"
ಅವನಿಗೆ ಸಿಟ್ಟು ಬಂದಿತ್ತು...
ಯಾಕೋ ? ಅಂತ ಕೇಳಿದೆ,
ನಿನ್ನ ಹಾಳು ಸಮಯ ನೋಡಿ, ನಾನು ೪ ಗಂಟೆಗೆ ಜಾಗಿಂಗ್ ಹೋಗಿದ್ದೆ,
ನಿನಗೊಂದು ದೊಡ್ಡ ನಮಸ್ಕಾರ ಮಾರಾಯಾ,
ಅಂತ ನಡೆದ ಸಂಗತಿ ಹೇಳಿದ..
ಆಗಾ ನಾನು ಬಿದ್ದು ಬಿದ್ದು ನಕ್ಕಿದ್ದು..
ಅಂದಿನಿಂದ ನನ್ನ ಮೊಬೈಲ್ನಲ್ಲಿ ಸಮಯ ನೋದೊದನ್ನೇ ಬಿಟ್ಟ...
ನಾನು ಕೂಡ ನನ್ನ ಮೊಬೈಲಿನಲ್ಲಿ ಸಮಯ ಮುಂದೆ ಇಡುವುದನ್ನು ಬಿಟ್ಟೆ..
Share/Save/Bookmark

Thursday, March 5, 2009

ರೆಹಮಾನ್ ಮತಾಂತರಗೊಂಡಿದ್ದು ಹೇಗೆ ?

ರೆಹಮಾನ್ ಅವರ ಮೊದಲ ಹೆಸರು ದಿಲೀಪ್ ಕುಮಾರ್ ಅಂತ ನನಗೆ ಗೊತ್ತಾಗಿದ್ದು ಅವರನ್ನು ಆಸ್ಕರ್ ಗೆ ಹೆಸರಿಸಿದಾಗಲೇ. ಆಗ ನನ್ನಲ್ಲೊಂದು ಪ್ರೆಶ್ನೆ ಮಾಡಿತು... ಅವರು ಮತಾಂತರಗೊಂಡಿದ್ದು ಯಾಕೆ?
ಹೀಗೆರುವಾಗ ಅಲೆಮಾರಿಯವರು, ರೆಹಮಾನ್ ಅವರ ಬಗ್ಗೆ ಬರೆದ ಒಂದು ಆರ್ಟಿಕಾಲ್ ನೋಡಿದೆ.
ರೆಹಮಾನ್ ಎಂಬ ದೇವದೂತ
http://olagoo-horagoo.blogspot.com/2009/03/blog-post.html

ಆ ಆರ್ಟಿಕಾಲ್ ಓದಿ, ಅವರನ್ನೇ ಕೇಳಿದೆ, ಆಗ ಅವರು ಕೊಟ್ಟ ಉತ್ತರ :
Anonymous said...
ರಹಮಾನ್ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲು ಕಾರಣವೇನು ಎಂದು ಶಿವಪ್ರಕಾಶ್ ಕೇಳಿದ್ದಾರೆ.
ಸ್ವತಃ ರಹಮಾನ್ ಈ ಪ್ರಶ್ನೆಗೆ ನೀಡಿದ ಉತ್ತರವನ್ನು ಇಲ್ಲಿ ಕೊಡುತ್ತಿದ್ದೇನೆ ....

"The whole process started with a sequence of dream. It was in 1988. I was in Malaysia and had a dream of an old man who was asking me to embrace Islam. For the first time, I did not take it seriously, but then I saw the same dream several times and I discussed it with my mother. She encouraged me to go ahead and to respond to the call o f the Almighty. Also, in 1988, one of my sisters fell seriously ill and in spite of the family's effort to cure her, her health deteriorated by the day. Then under the guidance of one Muslim religious leader we prayed to Allah, which did wonder for my sister and she made a miraculous comeback to life. Thus, began my journey from Dileep Kumar to A.R. Rahman.
My mother and I resolved to follow one faith ... we wanted to cleanse ourselves of our sorrows"
Share/Save/Bookmark

Tuesday, March 3, 2009

ಅಳುವುದೋ, ನಗುವುದೋ ನೀವೇ ಹೇಳಿ ?

ಮೈಸೂರಿನಲ್ಲಿದ್ದಾಗ, ನಾನು ನನ್ನ ಸ್ನೇಹಿತ ಸಂಗಮೇಶ್ ಸೇರಿ ಈಜಲು, ಹತ್ತಿರ ಇರುವ ಒಂದು ಈಜುಕೊಳಕ್ಕೆ ಹೋದೆವು.
ನಾನು ಆ ಈಜುಕೊಳಕ್ಕೆ ಹೋಗಿದ್ದು ಅದೇ ಮೊದಲ ಸಲ.
ಆಗ ಈಜುಕೊಳದ ಪ್ರೆವೇಶಕ್ಕೆ ಒಬ್ಬರಿಗೆ ೧೫ ರುಪಾಯಿ ಇತ್ತು. ನಮ್ಮಿಬ್ಬರ ಹಣವನ್ನು ಪಾವತಿಸಿ ಒಳ ನಡೆದೆವು.
ನಾನೂ ಒಳನಡಿದ ಒಡನೆಯೇ ಆತುರದಲ್ಲಿ ೪ ಅಡಿ ನೀರಿರುವಲ್ಲಿ ಧುಮುಕಿದೆ..
ಎಷ್ಟು ಪ್ರಯತ್ನಿಸಿದರು ತಳ ಸಿಗುತ್ತಿಲ್ಲ, ನೀರಲ್ಲಿ ಮುಳುಗ ತೊಡಗಿದೆ. ನನ್ನ ಸ್ನೇಹಿತ ನನ್ನನ್ನು ನೋಡಿ ಕಕ್ಕಾಬಿಕ್ಕಿಯಾದ...
ತಕ್ಷಣ ಕಾವಲುಗಾರನನ್ನು ಕರೆದ.
ಆ ಕಾವಲುಗಾರ ನನ್ನ ಪರಿಸ್ಥಿತಿಯನ್ನು ನೋಡಿ, ಒಂದು ಉದ್ದವಾದ ಕೋಲನ್ನು ತಂದು, ಅದನ್ನು ನನ್ನ ಕೈಯಿಗೆ ಸಿಗುವ ಹಾಗೆ ಹಿಡಿದ. ನಾನು ಅದನ್ನು ಹಿಡಿದುಕೊಂಡು ಈಜುಕೊಳದ ದಡ ಸೇರಿದೆ.
ಅದು ಸಾವಿನ ದವಡೆಯನ್ನು ತಟ್ಟಿ ಹೊರಬಂದಾಂತಿತ್ತು.
ನಂತರ ಆ ಕಾವಲುಗಾರ ನನ್ನನ್ನು ಕೇಳಿದ,
"ಈಜು ಬರುವುದಿಲ್ಲವೆ ?"
ನಾನಂದೆ "ಬರುವುದಿಲ್ಲ".
ಹಾಗಾದರೆ ಯಾವ ಧೈರ್ಯದ ಮೇಲೆ ಧುಮುಕಿದಿರಿ ?
ನಾನಂದೆ "ಅದಿರಲಿ, ನನಗೆ ೪ ಅಡಿಯಲ್ಲಿಯೇ ತಳ ಸಿಗಲಿಲ್ಲವಲ್ಲ ?"
ಅವನಂದ, "ನೀವು ಧುಮುಕಿದ್ದು ೪ ಅಡಿಯಲ್ಲಿ ಅಲ್ಲ, ೧೪ ಅಡಿಯಲ್ಲಿ"
ನಾನು "ಏನು ೧೪ ಅಡಿಯೇ...? ಹಾಗಾದರೆ ಅಲ್ಲಿ ೪ ಬರೆದಿದೆಯಲ್ಲ ?"
ಆಗ ಅವನು "ಅಯ್ಯೋ ಸ್ವಾಮಿ, ಅಲ್ಲಿ ೧ (ಒಂದು) ಅಳಿಸಿಹೋಗಿದೆ."
Share/Save/Bookmark