Thursday, November 3, 2016

ಅಂಬಿಗನಿರದ ಈ ದೋಣಿಗೆ..



ಮನುಜ..
ಸರಿಯಾಗಿ ನೋಡು...
ಹಣವಿಲ್ಲದೆ ನಿನಗೆ ಸಿಕ್ಕಿಹ...
ಬೆಲೆಕಟ್ಟಲಾಗದ ಅತ್ಯಮೂಲ್ಯ ಕೊಡುಗೆ ಇಲ್ಲಿದೆ...

ಇಲ್ಲಿ...
ಗಾಳಿಯಿದೆ...
ನೀರಿದೆ...
ಹಾಗು ಬೆಳಕಿದೆ...

ಬೆಳಕಿಲ್ಲದೆ ಬದುಕಿಲ್ಲ...
ಗಾಳಿಯಿಲ್ಲದೆ ಉಸಿರಿಲ್ಲ...
ನೀರಿಲ್ಲದೆ ನೀನೇ ಇಲ್ಲ..

ಉಚಿತವಾಗಿ ಸಿಕ್ಕಿದೆಯೆಂದು...
ಹಾಳು ಮಾಡಬೇಡ...
ಕಾಲಮೀರಿದೊಡೆ... ಪರಿತಪಿಸಿದರೂ...
ನಿನಗೆ ಕ್ಷಮೆಯಿಲ್ಲ...

ಅಂಬಿಗನಿರದ ಈ ದೋಣಿಗೆ,
ನೀನೆ ಅಂಬಿಗ...
ಇಲ್ಲಿ ಕಿಚ್ಚಿದೆ... ನೀರೂ ಇದೆ...
ಕಿಚ್ಚು ಹಚ್ಚಿದ್ದು ನೀನು...
ಆರಿಸಬೇಕಾಗಿರುವುದು ನೀನೇ...!!!

ಎಚ್ಚೆತ್ತುಕೊ...
ಈಗಾಗಲೇ ಬಹಳ ತಡವಾಗಿದೆ...
ಬಹಳ ತೆರಿಗೆ ಕಟ್ಟಿ ಕೊಳ್ಳುವ ದಿನ ಬಲುದೂರವಿಲ್ಲ...
ಆ ದುರಂತಕ್ಕಾಗಿ ಕಾಯಬೇಡ...

ನೀರಿನಾಳ ಅರಿಯದ...
ಈ ಕಾಗದದ ದೋಣಿಗೆ,
ಬುದ್ಧಿಯಂಬ ಕಿಚ್ಚು ಹಚ್ಚಿ....
ಕಾಪಾಡು...

ಬಳಸು...
ಬೆಳಸು...
ನಾಳಿನವರಿಗೂ ಕಾಪಾಡು...
ನಾ ಸುಟ್ಟು ಬೂದಿಯಾಗುವ ಮೊದಲು....

ಇಂತಿ ನಿನ್ನ ಹಡೆದವ್ವ,
ಪ್ರಕೃತಿ ಮಾತೆ...

---
ಶಿವಪ್ರಕಾಶ್ ಎಚ್ ಎಮ್


ಅವಧಿಯ ಕ್ಲಿಕ್ ಆಯ್ತು ಕವಿತೆಗೆ ಬರೆದ ಕವಿತೆ..
ಅವಧಿಯಲ್ಲಿ ಪ್ರಕಟವಾದ ಕೊಂಡಿ: ಅಂಬಿಗನಿರದ ಈ ದೋಣಿಗೆ..

Share/Save/Bookmark

2 comments:

  1. ಅಮೂಲ್ಯವಾದ ವಿಚಾರಧಾರೆ ಕವನರೂಪದಲ್ಲಿ ಹರಿದು ಬಂದಿದೆ!

    ReplyDelete