Thursday, July 14, 2011

ವೈರಾಗಿ... ನಾನಲ್ಲ..



ಜನ ಜಾತ್ರೆಯ ನಡುವೆ
ಕಳೆದುಹೊಗಬೇಕೆನಿಸುವುದು..
ಎಲ್ಲವನೊಮ್ಮೆ ದೂರಕೆ ತಳ್ಳಿ
ದೂರವಾಗಬೇಕೆನಿಸುವುದು..

ಮಾತುಗಾರರ ನಡುವೆ,
ಮೌನವಾಗಿರಬೇಕೆನಿಸುವುದು..
ಮಾತಲ್ಲದ ಮಾತಲ್ಲಿ
ಮಾತು ಹೇಳಬೇಕೆನಿಸುವುದು...

ಹರಿವ ನೀರನೊಮ್ಮೆ
ನಿಲಿಸಿ ಕೇಳಬೇಕೆನಿಸುವುದು
ನಿಂತ ನೀರನ್ನೊಮ್ಮೆ
ಕದಡಿ ಕೇಳಬೇಕೆನಿಸುವುದು..

ಈ ಜೀವನಕೆ
ಅರ್ಥವೇ ಇಲ್ಲವೆನಿಸುವುದು..
ಅರ್ಥ ಹುಡುಕುತಿರುವವರ
ಕಂಡು ಮರುಕ ಹುಟ್ಟುತಿಹುದು..

ಒಮ್ಮೊಮ್ಮೆ ಎಲ್ಲವು
ಬೇಕೆನಿಸುವುದು..
ಬೇಕೆನಿಸುವುದೆಲ್ಲಾ
ಬರಿ ಮಾಯೆ ಎಂದು ಮನ ಎಚ್ಚೆರಿಸುತಿಹುದು...

ಇಂತಿ,
ವೈರಾಗಿ... ನಾನಲ್ಲ..
ಶಿವಪ್ರಕಾಶ್
--

ಕೊನೆಯದಾಗಿ. ಡಿವಿಜಿ ಯವರ ಈ ಸಾಲು ನಿಮಗಾಗಿ...
"ವ್ಯರ್ಥವೀ ಜೀವನದ ಬಡಿದಾಟವೆನ್ನದಿರು | ಅರ್ಥವಹುದದು ನಿನಗೆ ಪೂರ್ಣದರ್ಶನದಿಂ"

Share/Save/Bookmark

Tuesday, July 5, 2011

KRS Backwater

ನಾವು ಸ್ನೇಹಿತರೆಲ್ಲ ಸೇರಿ ಮೊನ್ನೆ ಭಾನುವಾರ ಕೆ.ಅರ್.ಎಸ್ ಬ್ಯಾಕ್-ವಾಟರ್ ಗೆ ಹೋಗಿದ್ದೆವು. ಇಲ್ಲಿ ಕೆ.ಅರ್.ಎಸ್ ಡ್ಯಾಮ್ ನಲ್ಲಿ ಮುಳುಗಡೆಯಾಗಿದ್ದ ಹನ್ನೆರಡನೆ ಶತಮಾನದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನವನ್ನು ಎರಡು ವರ್ಷಗಳಿಂದ ಸ್ಥಳಾಂತರಿಸಲಾಗುತ್ತಿದೆ. ಈ ಸ್ಥಳ ತುಂಬ ಸುಂದರವಾಗಿದೆ.

ಅಲ್ಲಿ ಸೆರೆಹಿಡಿದ ಸುಂದರ ಚಿತ್ರಗಳು...


























ಇನ್ನೂ ನಮ್ಮೆಲ್ಲರ ತುಂಟಾಟವನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ. ಇದು ಆಲ್ಬಮ್ Folder ಗೆ ಕೊಂಡೊಯ್ಯುವುದು...

Addadiddi Part-2



ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ..
http://dasaramysore.in/backwater.php


Share/Save/Bookmark

Monday, June 13, 2011

ಅಗಲಿದ ಗೆಳೆಯನಿಗೆ...

ಗೆಳೆಯನಾಗಿ,
ಸಹೋದ್ಯೋಗಿಯಾಗಿ,
ಗುರುವಾಗಿ,
ಜೊತೆಗಿದ್ದು,
ಇದ್ದಕ್ಕಿದ್ದಂತೆ
ನೀನಿಲ್ಲ
ಎಂದು
ಒಪ್ಪಿಕೊಳ್ಳಲಾಗುತ್ತಿಲ್ಲ.

ನಿನ್ನೆಯವರೆಗೆ
ನಿ ಇರುವೆ ಎನ್ನುವ
ನಂಬಿಕೆಯಿಂದ
ನಾ ತುಂಬ ಧೈರ್ಯದಿಂದಿದ್ದೆ,
ಹೇಳದೆ ಕೇಳದೆ ನೀ ಇಂದು ದೂರವಾಗಿ ಹೋಗಿರುವೆ
ಬಾ ಎಂದರೂ
ಮರಳಿ ಬಾರದ ಲೋಕಕ್ಕೆ...

ಆ ದೇವರು ನಿನ್ನ ಆತ್ಮಕ್ಕೆ ಶಾಂತಿ ಕೊಡಲಿ.
ನಿಮ್ಮ ಕುಟುಂಬಕ್ಕೆ ಆ ದುಃಖ ಭರಿಸೊ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ.
Share/Save/Bookmark

Thursday, June 2, 2011

ಕದ್ದ ಸಾಲುಗಳು - ೧

ತಕರಾರು ಹೇಳಿಕೊಳ್ಳಬೇಕು ಎಂಬ ಆಳವಾದ ಅನಿಸಿಕೆ ಇದೆಯಲ್ಲ ?
ಅದೇ ಮನುಷ್ಯನಿಗೆ "ಭಾಷೆ" ಕಲಿಯುವಂತೆ ಮಾಡಿದ್ದು...!!!

-- ಎಲ್ಲೋ ಓದಿ, ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ ಸಾಲು.
===

ಜಗದೇಕವೀರನಂತೆ ಅವಳಿಗಾಗಿ ಬೆಂಡೋಲೆ ಆಯುವಾಗ
ಬಜೆಟ್ಟಿನ ಆಚೆಗಿನದನ್ನೇ ತೋರಿಸಿ ಹೀಯಾಳಿಸುವವನಂತೆ ಸೇಲ್ಸ್-ಮನ್ ನೀಚ ನಗೆಯಲ್ಲಿ ನಿಟ್ಟಿಸುವಾಗ
ಅವನ ಮೂಕ ಸಂಕಟ ಅರಿತವಳಂತೆ
'ಛೆ... ಚೆನ್ನಾಗಿಲ್ಲ ಇದು, ಇಷ್ಟು ದುಬಾರಿ ಕೊಳ್ಳೋಕೆ ತಲೆ ಕೆಟ್ಟಿದೆಯೆ ? ' -- ಎಂದು ಸೆಕೆಂಡಿನಲ್ಲಿ ಶಾಪ ವಿಮೋಚನೆ ಮಾಡಿ ಅವಳು ಅಂಗಡಿಯಿಂದ ಅವನನ್ನು ಹೊರಗೆಳೆದು ತಂದಿದ್ದು...

-- ತೂಫಾನ್ ಮೇಲ್
===

ಪಾದರಸ ಬಳಿದ ಕನ್ನಡಿ ಕಂಡುಹಿಡಿದ ವಿಜ್ಞಾನಿ ಸ್ತ್ರೀಲೋಕಕ್ಕೆ ಮಾಡಿರುವಸ್ಟು ಅಪಕಾರ ಬೇರೆ ಯಾರೂ ಮಾಡಿಲ್ಲ.

-- ಪಂಜರದ ಗಿಣಿ
===

"ನಾನು ಗಂಡಾಗಿ ಹುಟ್ಟಿಲ್ಲವೆಂದು ಸಂತೋಷಪಡುತ್ತೇನೆ.. ಹಾಗೆ ಹುಟ್ಟಿದರೆ ಹೆಣ್ಣನ್ನು ಮದುವೆಯಾಗಬೇಕಾದ ದುರ್ಭರ ಪ್ರಸಂಗ ಒದಗುತ್ತಿತ್ತು."
-- ಮ್ಯಾದಾಂ. ದಿ. ಸ್ಟೇಲ್ [Madame de Stael ]

-- ಪಂಜರದ ಗಿಣಿ
===
Share/Save/Bookmark

Sunday, May 22, 2011

ಸೌಂಡ್ ಪಾರ್ಟಿ

ಸೌಂಡ್ ಪಾರ್ಟಿ ಮಾವ ಸಿಗಲಿ ಎಂದು
ದೇವರಿಗೆ ಪ್ರಾರ್ಥಿಸಿದೆ.
ನನ್ನ ಪ್ರಾರ್ಥನೆಗೆ ಒಲಿದ ದೇವರು,
ಸೌಂಡ್ ಪಾರ್ಟಿ ಮಾವನನ್ನು ಕೊಟ್ಟು,
ಜೊತೆಗೆ ಬೋನಸ್ ಆಗಿ,
ಡಬಲ್ ಸೌಂಡ್ ಪಾರ್ಟಿಯಂತ ಹೆಂಡತಿಯನ್ನು ಕೊಟ್ಟ...
Share/Save/Bookmark

Friday, May 20, 2011

ಹೊನ್ನು-ಹೆಣ್ಣು-ಮಣ್ಣು

ಹೊನ್ನ ಗಳಿಸಿದೆ
ಹೆಣ್ಣು ಸಿಕ್ಕಳು
ನಾ ಮಣ್ಣಾದೆ.

Share/Save/Bookmark

Thursday, May 5, 2011

ಗುರಿ ಮರೆತ ಅಲೆಮಾರಿಯಾಗದಿರಿ

ಸುಗಮವಾಗಿದೆಯೆಂದು ದಾರಿ,
ಮರೆತು ನಡೆಯದಿರು ಜೀವನದ ಗುರಿ,
ನಿನಗರಿವಿಲ್ಲದೆ ಬೀಳುವೆ ಕಂದಕಕ್ಕೆ ಜಾರಿ
ಪ್ರಜ್ಞೆ ಬರುವುದರೊಳಗಾಗಿ,
ಹೋಗಬಹುದು ಪರಿಸ್ಥಿತಿ ಕೈಮೀರಿ...

ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ಇಂದಿಗೆ, ಚಿಂತೆ ಏತಕೆ...? ಎಂದು ಜೀವನವನ್ನು ತುಂಬ ಸುಲಭವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಕಠಿಣ ಪರಿಸ್ಥಿತಿ ಎದುರಾದಗ ತಲೆ ಮೇಲೆ ಕೈಇಟ್ಟುಕೊಂಡು, ಕೈಚಲ್ಲಿ ಕೂಡುತ್ತೇವೆ. ಈ ಸಮಸ್ಯೆ ನಮ್ಮಲ್ಲಿ ಅನೇಕರಿಗೆ ಇದೆ. ಹಾಗೆಂದು ಜೀವನವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳಿ ಎಂದು ನಾ ಹೇಳುತ್ತಿಲ್ಲ. ಈಗ ಸಂತೋಷವಾಗಿದ್ದೇನೆ ಎಂದು ಗುರಿ ಮರೆತು ನಡೆಯಬೇಡಿ, ಏಕೆಂದರೆ ಜೀವನದಲ್ಲಿ, ಯಾವುದು ಕೂಡ ಹೇಳಿ ಕೇಳಿ ಬರುವುದಿಲ್ಲ. ನಿನ್ನೆಯಂತೆ ನಾಳೆ ಇರುವುದಿಲ್ಲ. ಸುಂದರವಾದ ನಾಳೆಗಳಿಗಾಗಿ ಇಂದು ನಾವು ಶ್ರಮ ಪಡಲೇಬೇಕು ಎನ್ನುವುದು ನನ್ನ ಅನಿಸಿಕೆ.

ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು... ಎನ್ನುವ ಕುವೆಂಪುರವರ ಸಾಲುಗಳು ಎಸ್ಟು ಸತ್ಯ ಅಲ್ಲವೇ..? Success is a journey not a Destination.

ಗೆಲ್ಲಲೇಬೇಕೆಂಬ ಕೆಚ್ಚೆದೆ ನಿಮ್ಮಲ್ಲಿ ಇರಲಿ. ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ!!

--
ಗುರಿ ಮರೆತ ಅಲೆಮಾರಿಯಾಗದಿರಿ ಎನ್ನುವ ಆಶಯ ಹಾಗು ಶುಭಾಶಯಗಳೊಂದಿಗೆ,
ಶಿವಪ್ರಕಾಶ್
Share/Save/Bookmark