Tuesday, August 23, 2011

ಕಣ್ಣಿಂದ ಮನಸಿಗೆ ಮುಕ್ತಿ

ಮನವಿದು ನೊಂದು,
ಕಣ್ಣು ವದ್ದೆಯಾಗಿದೆ
ಆದರೂ ಕಣ್ಣೀರು ಹೊಮ್ಮುತ್ತಿಲ್ಲ.

ಕಣ್ಣೀರು ಹೊಮ್ಮಿಸಿ,
ಮಾನವ ತಣಿಸಲು,
ಕಣ್ಣು ಮನಸು ಮಾಡುತ್ತಿಲ್ಲ.

ಕಣ್ಣು ಮನಸು ಮಾಡಿ,
ಕಣ್ಣೀರು ಹೊಮ್ಮಿಸುವವರೆಗೂ,
ಈ ಮನಕೆ ಮುಕ್ತಿಯಿಲ್ಲ..

ಕಣ್ಣೀರು ತಡೆಹಿಡಿದ ಕಣ್ಣು,
ಮುಕ್ತಿ ಪಡೆಯದ ಮನಸು,
ಸದಾ ಕಾಡುವುದು ಒಗಟಿನಂತೆ.

Share/Save/Bookmark

9 comments:

  1. ಕರ್ಮಣ್ಯೇವಾಧಿಕಾರಸ್ತೇ...:). ಕವನ ಒಂತರಹಾ ಚೆನ್ನಾಗಿದೆ.

    ReplyDelete
  2. ಇದನ್ನ ಬರೀಬೇಕು ಅಂತ ನೀನು ಮನಸು ಮಾಡಿದಿಯಲ್ಲ . . ಅದೇ ಸಂತೋಷ.
    ಚೆನ್ನಾಗಿದೆ :-)

    ReplyDelete
  3. ನಿಮಗೆ ಕಣ್ಣೀರು ಬರಲಿ ಅಂತ ಹಾರೈಸಲೆ?
    (ಬಾಲು ಅವರು ತೆಗೆದ ಫೋಟೋಗಳಲ್ಲಿ ನಿಮ್ಮ ಮೀಸೆ ಮಾಯವಾಗಿದೆ. ನಿಮ್ಮ ಪ್ರೊಫೈಲಿನಲ್ಲಿ ಮೀಸೇನ ಹಾಗೆ ಇಟ್ಕೊಂಡಿದ್ದೀರಿ. ಸರಿಪಡಿಸಿ.)

    ReplyDelete
  4. ಕಣ್ ಕೊಳದಲ್ಲಿ ಕಣ್ಣೀರು ಇಂಗಿದಿಯೇನೋ..


    _ನನ್ನ ಬ್ಲಾಗಿಗೂ ಬನ್ನಿ:ಚಿಂತನಾ ಕೂಟ

    ReplyDelete
  5. ಆತ್ಮೀಯರೇ;ಗಂಡಿಗೆ ಕಣ್ಣೇರು ಬರದು.ಅದೊಂದು ಶಾಪವೇನೋ!ನೋವುಗಳೆಲ್ಲಾ ಮನದೊಳಗೆ ಹೆಪ್ಪುಗಟ್ಟಿ ಕಾಡುತ್ತವೆ.ಹೆಣ್ಣಿಗೆ ಕಣ್ಣೀರು ಒಂದು ವರದಾನ!ನೋವನ್ನೆಲ್ಲಾ ಕಣ್ಣೀರ ಮೂಲಕ ಹೊರಕ್ಕೆ ಹರಿಸಿ ನಿರಾಳವಾಗಿಬಿದುತ್ತಾಳೆ ಅಲ್ಲವೇ?ಚಂದದ ಕವನ.ಇನ್ನಷ್ಟು ಬರೆಯಿರಿ.ನನ್ನ ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

    ReplyDelete
  6. oh atuubidu geleya. ogatu bidisi mukti doreyali. nice...composition.

    ReplyDelete
  7. "ಕಣ್ಣೀರು ಹೊಮ್ಮಿಸುವವರೆಗೂ,
    ಈ ಮನಕೆ ಮುಕ್ತಿಯಿಲ್ಲ.."
    nice lines.. liked it...

    ReplyDelete
  8. ಯಾಕಪ್ಪ ನಿನಗೆ ಕಣ್ಣೀರು ಮನಸಿನ ಚಿಂತೆ?????

    ReplyDelete